ಬೆಂಗಳೂರು: ರಾಜ್ಯ ರಾಜಧಾನಿಯನ್ನು ಪ್ರತಿನಿಧಿಸುವ ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ಇಲ್ಲಿ ಪ್ರತಿ ಬಾರಿಯೂ ಚುನಾವಣೆಯ ಮೇಲೆ ರಾಜ್ಯದ ಇತರೆಡೆಗಿಂತ ಹೆಚ್ಚು ಹಣದ ಪ್ರಭಾವ ಇರುತ್ತದೆ. ಈ ಬಾರಿ ಕಾದು ನೋಡುವ ತಂತ್ರದ ಮೊರೆ ಹೋಗಿರುವ ಅಭ್ಯರ್ಥಿಗಳು ‘ದುಪ್ಪಟ್ಟು’ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.