‘ಸಹಾಯವಾಣಿ ಇದೆ ಎಂಬ ಕಾರಣಕ್ಕೆ ಈ ಪರಿಸ್ಥಿತಿಯಲ್ಲಿ ಕೊಂಚ ಧೈರ್ಯವಿದೆ. ಆದರೆ, ಮಾಹಿತಿಗಾಗಿ ದೀರ್ಘಕಾಲದವರೆಗೆ ಕಾಯುವ ತಾಳ್ಮೆ ಎಲ್ಲರಿಗೂ ಇಲ್ಲ. ರೋಗಿಯ ಜೀವ ಉಳಿಸಿಕೊಳ್ಳುವ ಪರದಾಟದಲ್ಲೇ ಪ್ರತಿಯೊಬ್ಬರೂ ಕರೆ ಮಾಡುತ್ತಾರೆ. ಆದರೆ, ಸಹಾಯವಾಣಿಯಿಂದ ಸ್ಪಂದನೆ ಸಾಲದು’ ಎಂದು ಕೆ.ಆರ್.ಪುರದ ನಿವಾಸಿ ಹರೀಶ್ ಬೇಸರ ವ್ಯಕ್ತಪಡಿಸಿದರು.