ಈ ಬಗ್ಗೆ ಸಂಘವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಪತ್ರ ಬರೆದಿದೆ. ‘ಕೋವಿಡ್ ನಿಯಂತ್ರಣ ಸಂಬಂಧ ಇದೇ 10 ರಿಂದ 15ರವರೆಗೆ ಲಸಿಕಾ ಕಾರ್ಯಕ್ರಮ ನಡೆಸಲು ಆದೇಶಿಸಲಾಗಿದೆ. ದಸರಾ ಹಬ್ಬ ಇರುವುದರಿಂದ ಸತತ ಐದು ದಿನಗಳು ಬಿಡುವಿಲ್ಲದೇ ಲಸಿಕಾ ಕಾರ್ಯಕ್ರಮ ನಡೆಸುವುದು ಸಮಸ್ಯೆಯಾಗುತ್ತದೆ.ಹಾಗಾಗಿ, ಪರ್ಯಾಯ ದಿನಗಳನ್ನು ನಿಗದಿಪಡಿಸುವಂತೆ ಇಲಾಖೆಯ ವಿವಿಧ ವೃಂದದ ಸಂಘದವರು ಮನವಿ ಮಾಡಿದ್ದಾರೆ’ ಎಂದು ಪತ್ರದಲ್ಲಿ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್ ತಿಳಿಸಿದ್ದಾರೆ.