ಸ್ಥಾನಿಕ ವೈದ್ಯರ ಮುಷ್ಕರದಿಂದಹೊರರೋಗಿ ವಿಭಾಗಗಳ (ಒಪಿಡಿ) ಸೇವೆಯಲ್ಲಿ ಕೆಲವೆಡೆ ವ್ಯತ್ಯಯವಾಗಿತ್ತು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿದ ಸ್ಥಾನಿಕ ವೈದ್ಯರು, ‘ಕೂಡಲೇ ಕೋವಿಡ್ ಅಪಾಯ ಭತ್ಯೆಯನ್ನು ಬಿಡುಗಡೆ ಮಾಡಬೇಕು.ಶೈಕ್ಷಣಿಕ ಶುಲ್ಕವನ್ನು 2018ರಂತೆ ಪುನರ್ ಪರಿಷ್ಕರಿಸಬೇಕು. ಕಿರಿಯ ವೈದ್ಯರು ಮತ್ತುಶಿಶಿಕ್ಷುಗಳಿಗೆ ಶಿಷ್ಯವೇತನವನ್ನು ಸಕಾಲಕ್ಕೆ ಪಾವತಿಸಬೇಕು’ ಎಂದು ಆಗ್ರಹಿಸಿದರು.