ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ಪಿಎಫ್ ಯೋಧ ಶಿವಾನಂದ ಅಂತ್ಯಕ್ರಿಯೆ

Last Updated 18 ಸೆಪ್ಟೆಂಬರ್ 2020, 6:54 IST
ಅಕ್ಷರ ಗಾತ್ರ

ಬಸವಕಲ್ಯಾಣ: ಸಿಆರ್‌ಪಿಎಫ್ ಯೋಧ ಶಿವಾನಂದ ಕುಂಬಾರ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಗಿಲಗಿಲಿ ಗ್ರಾಮದಲ್ಲಿ ಗುರುವಾರ ಸಕಲ ಗೌರವಗಳೊಂದಿಗೆ ನಡೆಯಿತು.

ಯೋಧ ಶಿವಾನಂದ ಕುಂಬಾರ ಅವರು ಛತ್ತಿಸಗಡ್‌ದಲ್ಲಿನ ತಮ್ಮ ಕ್ಯಾಂಪ್‌ನಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಛತ್ತಿಸಗಡದ ಸುಕ್ಮಾಎಂಬಲ್ಲಿ ಸಿಆರ್‌ಪಿಎಫ್‌ನ ಎಎಸ್‌ಐ ಹುದ್ದೆಯಲ್ಲಿದ್ದರು. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಗಿಲಗಿಲಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಲ್ಲೂಕು ಆಡಳಿತದಿಂದ ತಹಶೀಲ್ದಾರ್ ಸಾವಿತ್ರಿ ಸಲಗರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಿಆರ್‌ಪಿಎಫ್‌ನ ಯೋಧರು ಹಾಗೂ ಅಧಿಕಾರಿಗಳು ಹಾಜರಿದ್ದು ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT