ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹವಾಸ ದೋಷದಿಂದ ಸಿದ್ದರಾಮಯ್ಯಗೆ ಅನುಮಾನದ ಕಾಯಿಲೆ: ಸಿ.ಟಿ.ರವಿ

Last Updated 28 ಡಿಸೆಂಬರ್ 2020, 20:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಸಹವಾಸ ದೋಷದಿಂದ ಸಿದ್ದರಾಮಯ್ಯ ಅವರಿಗೆ ಅನುಮಾನದ ಕಾಯಿಲೆ ಬಂದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಪ್ರತಿಕ್ರಿಯಿಸಿದರು.

ಹನುಮ ಜಯಂತಿ ಸಂಬಂಧ ಸಿದ್ದರಾಮಯ್ಯ ಅವರ ಮಾತಿಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ‘ನಂಬಿಕೆಗಳ ಮೇಲೆ ಜಗತ್ತು ನಡೆಯುತ್ತಿದೆ. ಅಪ್ಪ ಎಂಬುದಕ್ಕೆ ಸಾಕ್ಷಿ ಏನು ಎಂದು ಅಮ್ಮನನ್ನು ಯಾರೂ ಕೇಳಲ್ಲ. ಸಾಕ್ಷಿ ಕೇಳುವ ಮನಃಸ್ಥಿತಿ ಇರುವವರು ಕೆಲವರು ಇರುತ್ತಾರೆ, ಅಂಥವರಲ್ಲಿ ಸಿದ್ದರಾಮಯ್ಯ ಒಬ್ಬರಾಗಿದ್ದಾರೆ’ ಎಂದರು.

‘ಅದು ಅವರ ದೋಷ. ಸಹವಾಸ ದೋಷದಲ್ಲಿ ಅವರು ಕೆಟ್ಟುಹೋಗಿದ್ದಾರೆ. ಕೆಲವರಿಗೆ ಭಗವಂತ ಕಾಣಲ್ಲ, ಮತ್ತೆ ಕೆಲವರಿಗೆ ಎಲ್ಲ ಕಡೆಯೂ ಕಾಣುತ್ತಾನೆ. ನೋಡುವ ನೋಟ ಇಲ್ಲದಿದ್ದರೆ ಎದುರಿಗೆ ಬಂದು ನಿಂತರೂ ಭಗವಂತ ಕಾಣಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT