ಸಮಿತಿಯು ಪ್ರಮುಖ ದಾರ್ಶನಿಕರು ಮತ್ತು ದೇಶಭಕ್ತರ ಕುರಿತ ಪಠ್ಯಗಳನ್ನು ಕೈಬಿಟ್ಟಿರುವ, ತಿರುಚಿರುವ, ರಾಜ್ಯದ ಸಾಹಿತಿಗಳ ಹಾಗೂ ನಮ್ಮ ಬಹುತ್ವದ ಸಂಸ್ಕೃತಿಗೆ ಪೂರಕವಾದ ಲೇಖನಗಳನ್ನು ಕೈಬಿಟ್ಟು, ಸಂಕುಚಿತ ವಾದವನ್ನು ಬೆಂಬಲಿಸುವ, ಮತೀಯವಾದವನ್ನು ಪ್ರಚೋದಿಸುವ ವ್ಯಕ್ತಿಗಳ ಲೇಖನಗಳನ್ನು ಸೇರಿಸಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಇದರಿಂದ ಚಿಂತಿತರಾಗಿದ್ದಾರೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.