‘ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರತಿವರ್ಷ ಸೀಟ್ ಬ್ಲಾಕಿಂಗ್ ಆಗುತ್ತದೆ. ಇದರಿಂದ ನಿಜವಾಗಿ ಸೀಟಿನ ಅಗತ್ಯ ಇರುವವರಿಗೆ ಅನ್ಯಾಯ ಆಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕಾನೂನಿನಲ್ಲಿ ಸುಧಾರಣೆಗಳನ್ನು ತರಲಾಗಿದೆ. ಅದರಂತೆ ಯಾರೇ ಸೀಟು ಪಡೆದುಕೊಂಡವರು ಪ್ರವೇಶ ಪಡೆಯದೇ ಹೋದಲ್ಲಿ ಸರ್ಕಾರಕ್ಕೆ ಹಿಂತಿರುಗಿಸಲು ಅವಕಾಶ ಇರುತ್ತದೆ. ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಕಾಲೇಜಿಗೆ ದಾಖಲಾಗದೇ ಹೋದಲ್ಲಿ ಎರಡನೇ ಸುತ್ತಿನ ವೇಳೆ ತಮ್ಮ ಸೀಟನ್ನು ಬೇರೆಯವರಿಗೆ ಬಿಟ್ಟುಕೊಡಬೇಕು. ಅಂತೆಯೇ ಎರಡನೇ ಸುತ್ತಿನಲ್ಲಿ ಪಡೆದವರು ಮಾಪ್ ಅಪ್ ಸುತ್ತಿಗೆ ಮುಂಚೆ ಸೀಟು ಹಿಂತಿರುಗಿಸಲು ಅವಕಾಶ ಇದೆ. ಆದರೆ ಮಾಪ್ಅಪ್ ಸುತ್ತಿನಲ್ಲಿ ಸೀಟು ಪಡೆದುಕೊಂಡವರು ದಾಖಲಾಗಲೇ ಬೇಕು. ಇಲ್ಲವಾದಲ್ಲಿ ದಂಡ ಕಟ್ಟಲೇಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.