ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದೇಶದ ಅರ್ಥ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಿದ್ದ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿದ್ದ ಕಾರಣ 'ಕಪ್ಪು ಹಣ. ಅವೈಜ್ಞಾನಿಕವಾಗಿ ₹2000 ಮುಖಬೆಲೆಯ ನೋಟುಗಳನ್ನು ಹೊರತಂದು ಮಾಡಿದ ಸಾಧನೆ ಏನು? 'ಕಪ್ಪು ಹಣ' ಕೂಡಿಡುವವರಿಗೆ ಸಹಕಾರವೇ?’ ಎಂದು ಪ್ರಶ್ನಿಸಿದೆ.