ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ಅವರು, ‘ಮಹದೇವಪುರ ವಲಯದ ರಸ್ತೆ ಕಾಮಗಾರಿಗೆ ಹೆಚ್ಚುವರಿ ₹119.82 ಕೋಟಿ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ತಮ್ಮ ಹಿಂಬಾಲಕರಿಗೆ ಅಕ್ರಮ ತುಂಡು ಗುತ್ತಿಗೆ ನೀಡಲು ಈ ಕಾಮಗಾರಿಗಳಿಗೆ ಟೆಂಡರ್ ಕರೆಯದೇ, 4ಜಿ ವಿನಾಯತಿ ಕೇಳಲಾಗಿದೆ. ಟೆಂಡರ್ ಕರೆದರೆ ಶೇ 40 ರಷ್ಟು ಕಮಿಷನ್ ಕೊಡಬೇಕು. 4ಜಿ ವಿನಾಯತಿ ಪಡೆದರೆ ಎಷ್ಟು ಕಮಿಷನ್, ಯಾರಿಗೆ ಎಷ್ಟು ಪಾಲು’ ಎಂದು ಪ್ರಶ್ನಿಸಿದ್ದಾರೆ.