‘ಯಾವುದೇ ಸಮುದಾಯದ ಮುಖಂಡರು ತಮ್ಮ ಭಾವನೆ ಹೇಳಿಕೊಂಡರೆ, ಮನವಿ ಕೊಟ್ಟರೆ ಗೌರವದಿಂದ ಸ್ವೀಕರಿಸುವುದು ನನ್ನ ಧರ್ಮ. ಮುಖ್ಯಮಂತ್ರಿ ಜೊತೆ ಮಾತನಾಡಿ ಸರ್ಕಾರದಿಂದ ಆದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದೇನೆ. ನಂಜುಂಡಿ ಜೊತೆ ಮಾತನಾಡಿ ವಿಶ್ವಕರ್ಮ ಸಮಾಜದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ. ವಿನಾಕಾರಣ ಯಾರೂ ಗೊಂದಲ ಸೃಷ್ಟಿಸಬಾರದು’ ಎಂದು ಅವರು ಕೋರಿದರು.