ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್,‘ನಾಡಿನ ದಾರ್ಶನಿಕರು, ಮಹನೀಯರಿಗೆ ಅಪಮಾನವಾದಾಗ ಸ್ವಾಮೀಜಿಗಳು ಕೈಕಟ್ಟಿ ಕೂರಬಾರದು’ ಎಂದು ಆಗ್ರಹಿಸಿದ್ದಾರೆ.
‘ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಾಡಿನ ಸ್ವಾಮೀಜಿಗಳ ಸೇವೆ ಅನನ್ಯ . ಅದೇ ಕ್ಷೇತ್ರಗಳ ಮೇಲೆ ಸರ್ಕಾರ ಮತ್ತಿತರರು ದಾಳಿ ನಡೆಸಿದಾಗ, ನಾಡಿನ ದಾರ್ಶನಿಕರು, ಮಹನೀಯರಿಗೆ ಅಪಮಾನವಾದಾಗ ಸ್ವಾಮೀಜಿಗಳು ಕೈಕಟ್ಟಿ ಕೂರಬಾರದು’ ಎಂದು ಹೇಳಿದ್ದಾರೆ.