ಸುತ್ತೂರು ಮಠದ ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘12ನೇ ಶತಮಾನದ ನಂತರ ಧಾರ್ಮಿಕ ಪರಂಪರೆಗೆ ವಿಶಿಷ್ಟ ಮಾನ್ಯತೆ ದೊರಕಿಸಿಕೊಟ್ಟವರು ಸಿದ್ದಲಿಂಗೇಶ್ವರ ಶ್ರೀಗಳು. ಅವರು ಧರ್ಮಕ್ಕೆ ಸಿದ್ಧಾಂತಗಳ ಮೌಲ್ಯ ದೊರಕಿಸಿಕೊಟ್ಟರು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಸಂಚಾರ ಮಾಡಿದ್ದಲ್ಲದೆ,ಹೋದಲೆಲ್ಲಾ ಹಲವು ಪರೀಕ್ಷೆಗಳನ್ನು ಎದುರಿಸಿ ಗೆದ್ದು ಬಂದಿದ್ದರು’ ಎಂದು ತಿಳಿಸಿದರು.