ಡಿ.ಜೆ.ಹಳ್ಳಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ರಕ್ಷಣೆ ನನ್ನ ಕರ್ತವ್ಯ. ನ್ಯಾಯದ ಬಗ್ಗೆ ಬಿಜೆಪಿಯ ಪಾಠ ಬೇಕಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಗೃಹಸಚಿವರೋ? ಹಾಗಿದ್ದರೆ, ನನ್ನನ್ನು ಬಂಧಿಸಬಹುದಿತ್ತಲ್ಲ? ನಳಿನ್ ಒಂದು ಸುಳ್ಳಿನ ಕಂತೆ. ಆದರೆ, ನೋಟಿಸ್ ಮೇಲೆ ನೋಟಿಸ್ಗಳನ್ನು ಏಕೆ ಕೊಡುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ’ ಎಂದರು.