ಇದಕ್ಕೆ ಧ್ವನಿಗೂಡಿಸಿದ ಶಿವಲಿಂಗೇಗೌಡ ಅವರು, ‘ಟೋಲ್ಗಳಲ್ಲಿ ನಮಗೆ ಗೌರವ ಸಿಗದಿದ್ದರೆ, ಊರಿನ ಜನ ಏನಂದುಕೊಳ್ಳುತ್ತಾರೆ. ನಮ್ಮ ವಾಹನಗಳಿಗೆ ಎಂಎಲ್ಎ ಎಂಬ ಫಲಕ ಇದ್ದರೂ, ವಾಹನದ ಕಿಟಕಿಯಲ್ಲಿ ಬಗ್ಗಿ ಬಗ್ಗಿ ನೋಡುತ್ತಾರೆ. ಇವಕ್ಕೆ ಏನು ಮಾಡೋದು. ಜನಪ್ರತಿನಿಧಿಗಳಿಗೆ ಗೌರವ ಘನತೆ ಇಲ್ಲವೇ. ಪ್ರತ್ಯೇಕ ಪಥ ಮಾಡಲು ಸಾಧ್ಯವಿಲ್ಲದಿದ್ದರೆ, ನಮಗೆ ಕೊಟ್ಟಿರುವ ಪಾಸ್ ಹಿಂದಕ್ಕೆ ಪಡೆಯಿರಿ’ ಎಂದು ಖಾರವಾಗಿ ನುಡಿದರು.