‘1927ರಲ್ಲಿ ಕೆರೆಯ ನೀರು ಮುಟ್ಟುವ ಹೋರಾಟ ನಡೆಸಿದ ಅಂಬೇಡ್ಕರ್ ಅವರು, ಮುಂದುವರಿದ ಭಾಗವಾಗಿ 1927ರ ಡಿಸೆಂಬರ್ 27ರಂದು ಮನುಸ್ಮೃತಿ ಸುಟ್ಟು ಹಾಕಿದರು. ಆದರೂ, ಶೂದ್ರರು, ಅತಿ ಶೂದ್ರರ ಮನಸುಗಳಲ್ಲಿ ಮನುಸ್ಮೃತಿ ಸೇರಿಕೊಂಡಿದೆ. ಎಲ್ಲಿಯ ತನಕ ಮನುಸ್ಮೃತಿ ಈ ದೇಶದಲ್ಲಿ ಇರುತ್ತದೋ ಅಲ್ಲಿಯ ತನಕ ಬ್ರಾಹ್ಮಣವಾದಿಗಳ ಆಟ ಮುಂದುವರಿಯುತ್ತದೆ. ಅದರ ಭಾಗವಾಗಿಯೇ ಶೇ 3ರಷ್ಟು ಜನಸಂಖ್ಯೆ ಇರುವವರಿಗೆ ಶೇ 10ರಷ್ಟು ಮೀಸಲಾತಿ(ಇಡಬ್ಲ್ಯುಎಸ್) ದೊರಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.