‘ಪಠ್ಯಕ್ರಮದಲ್ಲಿರುವ ಕುವೆಂಪು ಅವರ ಕುರಿತ ಪರಿಚಯವನ್ನು ನನ್ನ ನೇತೃತ್ವದ ಸಮಿತಿಯು ಬರೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲಾಗಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಬರೆದದ್ದಲ್ಲ. ಇಷ್ಟಕ್ಕೂ ಕುವೆಂಪು ಅವರ ‘ಮನುಜ ಮತ ವಿಶ್ವಪಥ’ ಸಂದೇಶದ ಬೆಳಕಿನಲ್ಲಿ ಸಾಗುತ್ತಿರುವ ನಾನು ಮತ್ತು ನನ್ನಂಥವರು ಅವರ ಅಪೂರ್ವ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.