ಹಾಸನ: ತಮ್ಮ ಪದ್ಯವನ್ನು ಪಠ್ಯದಲ್ಲಿ ಅಳವಡಿಸಿದ್ದಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘವು ನೀಡಿದ ₹ 1,500 ಮೊತ್ತದ ಚೆಕ್ ಅನ್ನು ರೂಪ ಹಾಸನ ತಿರಸ್ಕರಿಸಿದ್ದಾರೆ.
‘ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು– 2005ರ ನೀತಿ ನಿಯಮ ಗಾಳಿಗೆ ತೂರಿದ್ದನ್ನು ವಿರೋಧಿಸಿ ಅನುಮತಿ ವಾಪಸು ಪಡೆದಿದ್ದೆ. ಶಿಕ್ಷಣ ಸಚಿವರಿಗೂ ಪತ್ರ ಬರೆದಿದ್ದೆ. ಆದರೂ ಪಠ್ಯದಲ್ಲಿ ಬಳಸಿರುವುದು ಸರ್ವಾಧಿಕಾರಿ ಧೋರಣೆ’ ಎಂದು ತಿಳಿಸಿದ್ದಾರೆ.