ಶಿರಾ: ದಸರಾ ಹಬ್ಬದಿಂದಾಗಿ ಎರಡು ದಿನಗಳಿಂದ ಶಿರಾದಲ್ಲಿ ತಣ್ಣಗಾಗಿದ್ದ ಚುನಾವಣಾ ಪ್ರಚಾರದ ಅಬ್ಬರಮಂಗಳವಾರ ಮತ್ತೆ ಚುರುಕುಗೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿವಿಧ ಗ್ರಾಮಗಳಲ್ಲಿ ರೋಡ್ ಷೋ ನಡೆಸಿದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ ಅವರು ಶಿರಾ ಕ್ಷೇತ್ರದ ಹಳ್ಳಿ, ಹಳ್ಳಿಗಳಲ್ಲಿ ತಿರುಗಿ ಬಿರುಸಿನ ಪ್ರಚಾರ ನಡೆಸಿದರು.
ದಸರಾ ಹಬ್ಬದ ಆಚರಣೆಗೆ ಊರಿಗೆ ತೆರಳಿದ್ದ ದೇವೇಗೌಡರು ಮತ್ತೆ ಮಂಗಳವಾರದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಡಿ.ಕೆ.ಶಿವಕುಮಾರ್ ಬುಧವಾರವೂ ರೋಡ್ ಷೋ ನಡೆಸಲಿದ್ದಾರೆ.