ಹೊಸಪೇಟೆ (ವಿಜಯನಗರ): ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಜಿಂದಾಲ್ ವಾಯುನೆಲೆಗೆ ಬಂದಿಳಿದ ಪಕ್ಷದ ರಾಷ್ಟ್ರೀಯ ಅಧ್ತಕ್ಷ ಜೆ.ಪಿ. ನಡ್ಡಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು.
ಸಚಿವರಾದ ಬಿ.ಶ್ರೀರಾಮುಲು, ಆನಂದ್ ಸಿಂಗ್ ಜತೆಗಿದ್ದರು.
ಸಾಂಪ್ರದಾಯಿಕ ಸ್ವಾಗತ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಬಂದ ನಡ್ಡಾ ಅವರಿಗೆಕಂಸಾಳೆ, ಡೊಳ್ಳು ಕುಣಿತದ ತಂಡಗಳ ನಾದ, ಜಯಘೋಷಗಳ ನಡುವೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಗೋವಿಗೆ ಪೂಜೆ ನೆರವೇರಿಸಿ ಬೆಲ್ಲ ತಿನಿಸಿದರು.