ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬುದು ಅಂಬೇಡ್ಕರ್ ಈ ದೇಶದ ದುರ್ಬಲ ವರ್ಗಗಳಿಗೆ ನೀಡಿದ ದೊಡ್ಡ ಸಂದೇಶ. ಸಂಘರ್ಷ ಇಲ್ಲದೆ ಅಧಿಕಾರ, ಹಕ್ಕು ಯಾವುದೂ ಸಿಗದು. ಅಂಬೇಡ್ಕರ್ ಹೇಳಿದಂತೆ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಂಡು, ಸಂಘಟನೆಯನ್ನು ಕಟ್ಟಿಕೊಳ್ಳಬೇಕು. ಬಳಿಕ ಹೋರಾಟ ನಡೆಸಬೇಕು. ದಲಿತರು, ವಂಚಿತರು, ಬಹುಜನರು ಎಲ್ಲರೂ ಈ ಹೋರಾಟದ ಭಾಗವಾಗಿರಬೇಕು ಎಂದು ಹೇಳಿದರು.