ದೇಶೀಯವಾಗಿ ಅಭಿವೃದ್ಧಿಪಡಿಸಿದ, ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ನಿರ್ಮಿಸಿದ ‘ಸರಾಸ್–3’ ರೇಡಿಯೊ ದೂರದರ್ಶಕವನ್ನು ದಂಡಿಗಾನಹಳ್ಳಿ ಕೆರೆ ಮತ್ತು ಶರಾವತಿ ಹಿನ್ನೀರಿನಲ್ಲಿ 2020ರಲ್ಲಿ ಅಳವಡಿಸಲಾಗಿತ್ತು. ಈ ದೂರದರ್ಶಕ ಮೂಲಕ 20 ಕೋಟಿ ವರ್ಷಗಳ ಹಿಂದೆ ‘ಮಹಾಸ್ಫೋಟದಿಂದಾಗಿ (ಬಿಗ್ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದ ವಿದ್ಯಮಾನ, ಆ ಬಳಿಕ ಹುಟ್ಟಿದ ನಕ್ಷತ್ರಗಳು ಮತ್ತು ಸೃಷ್ಟಿಯಾದ ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.