ವಿವಿಧ ಜಾತಿಯ ಮರಗಿಡಗಳು ಸುಟ್ಟು ಭಸ್ಮವಾಗಿವೆ. ವಿನಾಶದ ಅಂಚಿನಲ್ಲಿರುವ ಕೊಂಡುಕುರಿ, ಕೃಷ್ಣಮೃಗ, ಚಿಂಕಾರ, ಚಿರತೆ ಸೇರಿ ಅಪಾರ ಜೀವವೈವಿಧ್ಯದ ತಾಣವಾಗಿರುವ ಅರಣ್ಯದಲ್ಲಿ ಈಚೆಗೆ ಸೂಕ್ತ ಸಂರಕ್ಷಣೆ ಹಾಗೂ ಉಸ್ತುವಾರಿ ಕೊರತೆಯಾಗಿದೆ ಎಂಬ ದೂರುಗಳಿವೆ. ಬೆಂಕಿ ಕಾಣಸಿಕೊಂಡ ಸಮಯದಲ್ಲಿ ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ, ಪ್ರಮುಖ ಅಧಿಕಾರಿ ಮತ್ತು ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ.