ಈ ಕುರಿತು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಎಲ್ಲೇ ರಾಷ್ಟ್ರ ಧ್ವಜಾರೋಹಣ ಮಾಡಿದರೆ ಸೂರ್ಯಾಸ್ತದ ವೇಳೆ ಗೌರವದಿಂದ ಕೆಳಗಿಳಿಸಬೇಕು. ರಾತ್ರಿಯಿಡೀ ಹಾಗೆಯೇ ಇಡುವಂತಿಲ್ಲ. ರೋಟರಿ ವೃತ್ತದಲ್ಲಿ ಹಾರಿಸಿರುವ ಧ್ವಜ ತಾಲ್ಲೂಕು ಆಡಳಿತಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಅಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿರುವುದರಿಂದ ನೋಡಲು ಅಂದವಾಗಿ ಕಾಣುತ್ತದೆ ಎಂದು ರಾತ್ರಿಯೂ ಹಾಗೆಯೇ ಬಿಟ್ಟಿದ್ದಾರೆ. ಬುಧವಾರ ಸಂಜೆಯೊಳಗೆ ಧ್ವಜ ಕೆಳಗಿಳಿಸುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.