ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ’ಸ್ವಯಂ ವೈದ್ಯದಿಂದ ಕೊರೊನಾ ಸೋಂಕು ದೂರವಾಗುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮೂಗಿಗೆ ನಿಂಬೆಹಣ್ಣಿನ ರಸ ಹಚ್ಚುವುದರಿಂದ, ಬಿಸಿನೀರು ಕುಡಿಯುವುದರಿಂದಲೇ ಸೋಂಕು ವಾಸಿಯಾಗುವುದಿಲ್ಲ. ಆರಂಭದಲ್ಲೇ ಚಿಕಿತ್ಸೆ ಪಡೆದರೆ ಮಾತ್ರ ಕಾಯಿಲೆಯಿಂದ ಗುಣಮುಖರಾಗಬಹುದು‘ ಎಂದು ಹೇಳಿದರು.