‘ಈ ಹಿಂದೆ ಪ್ರತಿಭಟನೆ ನಡೆಸಿದ್ದಾಗ ಅಂದಿನ ಸಾರಿಗೆ ಸಚಿವರು ಸಂಧಾನ ನಡೆಸಿದ್ದರು. 6ನೇ ವೇತನದ ಆಯೋಗದ ಮಾದರಿಯಲ್ಲೇ ಸಾರಿಗೆನೌಕರರಿಗೂ ವೇತನ ನೀಡಲಾಗುವುದು. ಇದನ್ನು ಮೂರು ತಿಂಗಳ ಒಳಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದು ಈಡೇರದ ಕಾರಣಕ್ಕೆ ಮತ್ತೆ ಪ್ರತಿಭಟನೆ ನಡೆಸಲಾಗಿತ್ತು. ಆಗ ಸರ್ಕಾರವು ನೌಕರರ ವಜಾ, ವರ್ಗಾವಣೆ, ಅಮಾನತು ಮಾಡಿತ್ತು.