‘ಹೆಚ್ಚಿನ ವೇತನ ಕೊಡಿಸುವ ಆಮಿಷ ಒಡ್ಡಿದ್ದ ನೇಮಕಾತಿ ಏಜೆನ್ಸಿಯ ಮಾತು ನಂಬಿ ಕಾಂಬೋಡಿಯ ದೇಶಕ್ಕೆ ಹೋಗಿದ್ದ ಕಿರಣ್ ಮೋಸಹೋಗಿದ್ದಾರೆ. ಅವರು ಈಗ ಅಲ್ಲಿನ ಖಾಸಗಿ ಸಂಸ್ಥೆಯೊಂದರ ವಶದಲ್ಲಿದ್ದಾರೆ. ರಕ್ಷಿಸಿ ಕರೆತರಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರ್ ಅವರ ಕಚೇರಿ ಜತೆ ಸತತ ಸಂಪರ್ಕದಲ್ಲಿದ್ದೇನೆ’ ಎಂದು ಗೃಹ ಸಚಿವರು ತಿಳಿಸಿದ್ದಾರೆ.