ಸುದ್ದಿಗಾರರ ಜತೆಮಂಗಳವಾರ ಮಾತನಾಡಿದ ಅವರು, ‘ಕೋವಿಡ್ ನಿಯಂತ್ರಣ ಮತ್ತು ಪರೀಕ್ಷೆಯಲ್ಲಿ ತಪ್ಪು ಕಂಡುಬಂದಿದ್ದರೆ ಅವರು ಸರ್ಕಾರಕ್ಕೆ ದೂರು ನೀಡಬೇಕಿತ್ತು. ರಾಜಕೀಯ ಲಾಭಕ್ಕಾಗಿ ತಪ್ಪು ಸಂದೇಶ ನೀಡಿ, ವದಂತಿ ಹಬ್ಬಿಸಿದ್ದಾರೆ. ಸುಳ್ಳು ಆರೋಪಕ್ಕೆ ಸಾಕ್ಷ್ಯ ಕೊಡದಿದ್ದರೆ ಅಥವಾ ಕ್ಷಮೆ ಯಾಚಿಸದಿದ್ದರೆ ಶಿವಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದರು.