‘ಹಿಂದಿನ ವರ್ಷ ಅಧಿಸೂಚನೆ ಪ್ರಕಟಗೊಂಡಾಗಲೇ ಖಾಕಿಯ ಕನಸು ಕಂಡಿದ್ದೆವು. ಅವಕಾಶ ಸಿಕ್ಕಿದ ಹುಮ್ಮಸ್ಸಿನಿಂದ, ಕೊರೊನಾ ವೈರಸ್ ಹಾವಳಿ ಉಲ್ಬಣಿಸಿದ ಕಾಲಘಟ್ಟದಲ್ಲೇ ಪರೀಕ್ಷೆ ಬರೆದು ಪದವಿ ಪಡೆದಿದ್ದೇವೆ. ತರಬೇತಿ, ಕೋಚಿಂಗ್ ಕ್ಲಾಸ್ಗಳ ಮಾರ್ಗದರ್ಶನವನ್ನೂ ಪಡೆದು, ಸೂಕ್ತ ತಯಾರಿ ನಡೆಸಿಕೊಂಡಿದ್ದೆವು. ಈಗಿನ ಅಧಿಸೂಚನೆ ನಮ್ಮ ಕನಸಿಗೆ ಕೊಳ್ಳಿ ಇಟ್ಟಿದೆ’ ಎಂದು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶರತ್ ನಾಯ್ಕ್ ಅಸಮಾಧಾನ ಹೊರಹಾಕಿದರು. ಇದಕ್ಕೆ ಜುಬೇರ್, ನಾಗೇಶ್, ಶಂಕರ್ ಸಹ ಧ್ವನಿಗೂಡಿಸಿದರು.