ಭಾಷೆ, ನದಿ ನೀರಿನ ವಿಚಾರದಲ್ಲಿ ಕರ್ನಾಟಕ ಹಾಗೂ ಕನ್ನಡಿಗರನ್ನು ಕೇಂದ್ರ ಸರ್ಕಾರ ಲಘುವಾಗಿ ಪರಿಗಣಿಸುತ್ತಿದೆ. ರಾಜ್ಯದ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಇಲ್ಲಿನ ಸಚಿವರು ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡ ಕುರಿತು ಅವರ ನಿಲುವೇನು? ಅವರಿಗೆ ಹಿಂದಿಯ ಮೇಲೇಕೆ ಮೋಹ? ಕನ್ನಡದ ನಿರ್ಲಕ್ಷ್ಯ ಏಕೆ? ಇಂತಹ ನಾಯಕರನ್ನು ಕನ್ನಡ ದ್ರೋಹಿಗಳೆನ್ನದೆ ಬೇರೆ ಏನೆಂದು ಕರೆಯಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.