‘ನಾನು ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ಕಾಲೇಜುಗಳಿವೆ ಎಂಬ ಮಾಹಿತಿ ಹೊರಟ್ಟಿ ಅವರ ಬಳಿ ಇರಲಿಲ್ಲ. ಕಪ್ ಗೆಲ್ಲಲು ಅನೇಕರು ಹೋರಾಟ ಮಾಡುತ್ತಾರೆ. ಆದರೆ ನಾಯಕ ಕಪ್ ಹಿಡಿಯುವುದು ಪದ್ಧತಿ. ಆದರೆ, ನಾನೇ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ಅವರು ಏನೂ ಮಾಡಿಲ್ಲ. ನಮ್ಮಿಂದ ಎಲ್ಲಾ ಪಡೆದು ಹೋದ ಮೇಲೆ ಮಾತಾಡುತ್ತಾರೆ. ಅವರ ಗೆಲುವಿಗೆ ಯಾವ ರೀತಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.