ಸಮ್ಮೇಳನದ ಸಮಾರೋಪದಲ್ಲಿ ಅಧ್ಯಕ್ಷರ ನುಡಿಯಾಡಿದ ಅವರು, ‘ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಸ್ಥಾನವಿದೆ. ಕನ್ನಡಿಗರೆಲ್ಲ ಒಂದಾಗಿ ಮತ್ತಷ್ಟು ಉನ್ನತಿಗೆ ಕೊಂಡೊಯ್ಯಬೇಕಿದೆ. ಟೀಕೆಗಳು ಪುನರ್ ಜೀವನಕ್ಕೆ ಕಾರಣವಾಗಬೇಕು. ವಿರೋಧಿಗಳು ನಮ್ಮ ಜೊತೆ ಕೈಜೋಡಿಸಿದರೆ, ಕನ್ನಡ ಕುಟುಂಬ ಮತ್ತಷ್ಟು ದೊಡ್ಡದಾಗಿ, ಹೃದಯವಂತಿಕೆ ಪಲ್ಲವಿಸುವಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.