ಏಷ್ಯನ್ ಬ್ಯಾಂಕ್ ಅನುದಾನ ಪಡೆದು ಪ್ರತಿದಿನ 225 ಟನ್ ತ್ಯಾಜ್ಯಸಂಸ್ಕರಣೆ ಮತ್ತು ವಿಲೇವಾರಿಯನ್ನು ಮಂಗಳೂರು ಪಾಲಿಕೆ 2010ರಿಂದ ಮಾಡುತ್ತಿದೆ. ಆದರೆ, ನಿತ್ಯ 425 ಟನ್ ಕಸ ಸಂಗ್ರಹವಾಗುತ್ತಿದೆ. ಸಮಸ್ಯೆ ಸರಿಪಡಿಸಲು ₹22 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಕೋರಲಾಗಿದ್ದು, ಆದರೆ, ₹8 ಕೋಟಿ ಮಾತ್ರ ದೊರೆತಿದೆ. ನೆಲಭರ್ತಿ ಘಟಕ ಕುಸಿತದಿಂದ ತೊಂದರೆಗೆ ಸಿಲುಕಿದ್ದಾರೆ ಎಂದು ಗುರುತಿಸಲಾದ 35 ಜನರಲ್ಲಿ 19 ಜನರಿಗೆ ₹4 ಕೋಟಿಯನ್ನು ಪರಿಹಾರವಾಗಿ ವಿತರಿಸಲಾಗಿದೆ’ ಎಂದು ಪಾಲಿಕೆ ವಿವರಿಸಿದೆ.