‘ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ಧಮ್ ಇಲ್ಲ. ಗೆದ್ದಲು ಕಟ್ಟುವ ಹುತ್ತದಲ್ಲಿ ವಿಷ ಸರ್ಪದಂತೆ ಸೇರಿಕೊಳ್ಳುವ, ಬೇರೆಯವರ ಕಷ್ಟದ ಫಲವಾಗಿ ಅಧಿಕಾರ ಅನುಭವಿಸುವ ನೀವು ಜೆಡಿಎಸ್ ಬಗ್ಗೆ ಮಾತನಾಡುವುದೆ? ಕಾಂಗ್ರೆಸ್ ಸೇರುವ ಮುನ್ನ ನೀವು ಯಾರ ಬಾಲಂಗೋಚಿ ಆಗಿದ್ದೀರಿ? ಗುರುಸ್ವಾಮಿ ಎದುರು ಸೋತು ಸುಣ್ಣವಾದ ಬಳಿಕ ಅನುಗ್ರಹಕ್ಕೆ ಬಂದು ಯಾರ ಮುಂದೆ ಗಳಗಳನೆ ಅತ್ತು ರಾಜಕೀಯ ಬಿಟ್ಟು ವಕೀಲಿ ಮಾಡುತ್ತೇನೆ ಎಂದಿರಿ ಎನ್ನುವುದು ನೆನಪಿದೆಯಾ? ಆಗ ನಿಮಗೆ ಬಾಲಂಗೋಚಿತನ ನೆನಪಾಗಲಿಲ್ಲವೆ?’ ಎಂದು ಕೇಳಿದ್ದಾರೆ.