ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಚಾಮುಂಡೇಶ್ವರಿ ಬಿಲ್ಡ್ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರು 1986ರಿಂದ ಹಂತ ಹಂತವಾಗಿ ಸರ್ಕಾರದ ಅನುಮತಿ ಪಡೆದುಕೊಂಡು ರೆಸಾರ್ಟ್ ನಿರ್ಮಿಸಿದ್ದಾರೆ. ಸರ್ಕಾರಿ ಜಮೀನು ಅತಿಕ್ರಮಣ ಆರೋಪದಡಿ ₹ 1 ಕೋಟಿಗಿಂತ ಕಡಿಮೆ ದಂಡ ವಿಧಿಸಲಾಗಿತ್ತು. ಅದು ₹ 982 ಕೋಟಿಗೆ ಏರಿಕೆಯಾಗಲು ರಾಜಕೀಯ ಪ್ರಭಾವವೇ ಕಾರಣ’ ಎಂದರು.