ಗೃಹ ಸಚಿವರ ರಾಜೀನಾಮೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿರುವ ಬಗ್ಗೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ತನಿಖೆಯ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಅನೇಕ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಹಗರಣದ ಬಗ್ಗೆ ಈ ರೀತಿಯ ಗಂಭೀರ ತನಿಖೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಎಲ್ಲ ಹಗರಣಗಳನ್ನು, ತನಿಖಾ ವರದಿಗಳನ್ನು ಮುಚ್ಚಿ ಹಾಕಿತ್ತು. ಕೆಂಪಣ್ಣ ಆಯೋಗದ ವರದಿ ಏನಾಯ್ತು? ರಿಡೂ ಪ್ರಕರಣ ಏನಾಯ್ತು ಎಂಬುದನ್ನುನೋಡಿದ್ದೇವೆ. ಇಂತಹ ಬಹಳಷ್ಟು ವಿಚಾರಗಳಿವೆ. ಈ ಬಗ್ಗೆ ಮಾತನಾಡದೇ ಇದ್ದರೆ ಕಾಂಗ್ರೆಸ್ನವರಿಗೇ ಒಳ್ಳೆಯದು’ ಎಂದರು.