ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ಹೋಟೆಲ್, ಅಂಗಡಿ, ಬೈಕ್ ಸ್ಟ್ಯಾಂಡ್, ಬೇಕರಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮೂಡಲಕೊಪ್ಪಲು- ಕಂಠೇನಹಳ್ಳಿ ಬಳಿ ಚಾಮರಾಜ ಬಲ ದಂಡೆ ನಾಲೆಯ ಗೋಡೆ ಭಾನು ವಾರ ರಾತ್ರಿ ಕುಸಿದಿದ್ದು, ಅಪಾರ ನೀರು ಪೋಲಾಗಿದೆ. ಹುಣಸೂರಿನ ಮಂಜುನಾಥ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಹುಣಸೂರಿನಲ್ಲಿ 21 ಸೆಂ.ಮೀ ಮಳೆಯಾಗಿದೆ.