‘2019ರ ಮಾ.16ರಂದು ಯಾದಗಿರಿ ಜಿಲ್ಲೆಯಲ್ಲಿ ಕೊನೆಯ ಸಭೆ ನಡೆದಿದೆ. ಸಭೆಯ ನಡಾವಳಿ ಗಮನಿಸಿದರೆ ಅದು ಕೂಡ ಹಳ್ಳಿಯಲ್ಲಿ ನಡೆದಿಲ್ಲ. 2021ರ ಜನವರಿ ಮತ್ತು ಫೆಬ್ರುವರಿಯಲ್ಲಿ ಬಂದಿರುವ ದೂರುಗಳನ್ನೇ ಕುಂದು–ಕೊರತೆ ಅರ್ಜಿಗಳೆಂದು ಪರಿಗಣಿಸಿ’ ಎಂದು ಯಾದಗರಿ ಜಿಲ್ಲಾ ಸಮಿತಿಗೆ ನಿರ್ದೇಶನ ನೀಡಿತು. ‘ಯಾವುದೇ ರೈತರು ಬೆಳೆ ವಿಮೆ ಯೋಜನೆಯ ಪ್ರಯೋಜನದಿಂದ ವಂಚಿತರಾಗಿದ್ದಾರೆಯೇ ಎಂಬುದನ್ನು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳನ್ನು ನಿಯೋಜಿಸಬೇಕು’ ಎಂದು ತಿಳಿಸಿತು.