‘ನ್ಯಾಯಾಲಯದ ಅಭಿಪ್ರಾಯ ಆಗಸ್ಟ್ 1ರಂದು ಪತ್ರಿಕೆಗಳನ್ನು ನೋಡಿದಾಗಷ್ಟೆ ನನಗೆ ತಿಳಿಯಿತು. ಈ ಹಿಂದೆ ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದಾಗ ಯಾವತ್ತೂ ₹ 5,000 ದಿಂದ ₹ 10,000 ಮೀರಿರಲಿಲ್ಲ. ಇದೇ ಮೊದಲ ಬಾರಿಗೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಬೇಕಿದೆ. ಅಷ್ಟೊಂದು ಮೊತ್ತ ನಮ್ಮ ಸಂಸ್ಥೆಯ ಬಳಿ ಇಲ್ಲ. ದೇಣಿಗೆ ಸಂಗ್ರಹಿಸಿ ಶುಲ್ಕ ಪಾವತಿಸಲು ಅವಕಾಶ ನೀಡಬೇಕು’ ಎಂದು ಹಿರೇಮಠ ಮನವಿ ಮಾಡಿದರು.