ಶಾಲೆಗಳ ಸದ್ಯದ ಸ್ಥಿತಿಗತಿ ವರದಿಯನ್ನು ಸರ್ಕಾರ ಮಂಗಳವಾರ ಸಲ್ಲಿಸಿತು. ‘ಆಹಾರ ಬೇಯಿಸಿ ಬಡಿಸುವುದರಿಂದ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಬಿಸಿಯೂಟ ಆರಂಭಿಸಿಲ್ಲ. ಏಪ್ರಿಲ್ 10 ರಿಂದ ಜೂನ್ 10ರವರೆಗಿನ 47 ದಿನಗಳ ಕಾಲದ ಆಹಾರ ಭತ್ಯೆ ನೀಡಲು ಆರ್ಥಿಕ ನೆರವು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ವರದಿಯಲ್ಲಿ ತಿಳಿಸಿದೆ.