‘ಘಟಿಕೋತ್ಸವ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟವೂ ಹೌದು. ಆದರೆ, ಸದ್ಯದ ಸ್ಥಿತಿಯಲ್ಲಿ ಘಟಿಕೋತ್ಸವ ನಡೆಸಲಾಗದ ವಾತಾವರಣ ಇದೆ. ಪದವಿ ಪ್ರಮಾಣಪತ್ರವು ವಿದ್ಯಾರ್ಥಿಗೆ ದೇಶ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಮತ್ತು ಉದ್ಯೋಗಕ್ಕೆ ಸೇರಲು ಅನಿವಾರ್ಯ. ಇಂತಹ ಪ್ರಮಾಣಪತ್ರಗಳು ವಿಶ್ವವಿದ್ಯಾಲಯಗಳ ಕಪಾಟಿನಲ್ಲಿ ಇರುವುದಕ್ಕಿಂತಲೂ ವಿದ್ಯಾರ್ಥಿಯ ಕೈಯಲ್ಲಿದ್ದರೆ ಪ್ರಯೋಜನಕ್ಕೆ ಬರುತ್ತವೆ’ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದ್ದಾರೆ.