ಎಲ್ಲ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಿ.ಎಚ್. ಹನುಮಂತರಾಯ ಅವರು, ‘ದೂರುದಾರ ತೇಜ ಪತ್ರಕರ್ತರಲ್ಲ. ಸಂವಾದ ಎನ್ನುವುದು ಟಿವಿ ಚಾನೆಲ್ ಕೂಡ ಅಲ್ಲ. ಅದೊಂದು ಯೂಟ್ಯೂಬ್ ಅಕೌಂಟ್. ಅದರಲ್ಲಿ ಯಾವುದೇ ಸುದ್ದಿಗಳು ಪ್ರಸಾರವಾಗುವುದಿಲ್ಲ. ಅದರ ಪ್ರತಿನಿಧಿ ಪ್ರತಿಭಟನೆಗೆ ಬಂದದ್ದು ತನ್ನ ಸಂಘಟನೆಯ ನಾಯಕರಿಗೆ ವರದಿ ಒಪ್ಪಿಸಲಿಕ್ಕೇ ಹೊರತು ಪತ್ರಿಕೋದ್ಯಮದ ವರದಿ ಮಾಡಲು ಅಲ್ಲ. ಆದ್ದರಿಂದ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.