ಚನ್ನಪಟ್ಟಣದಲ್ಲಿ ಸೋಮವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ಹಿಜಾಬ್– ಕೇಸರಿ ಶಾಲು ವಿಚಾರವನ್ನು ಬಳಸಿಕೊಂಡು ಸಮಾಜ ಒಡೆಯುವ ಕೆಲಸ ಮಾಡಬಾರದು. ಕೆಲವು ಸಂಘಟನೆಗಳು ಹೆಣ್ಣು ಮಕ್ಕಳನ್ನು ಪ್ರಚೋದಿಸುತ್ತಿವೆ. ಮತ್ತೊಂದೆಡೆ, ಎರಡು ರಾಜಕೀಯ ಪಕ್ಷಗಳು ಮತ ಪಡೆಯಲು ಒಂದೊಂದು ಸಮಾಜಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಮಕ್ಕಳು ಕೆಲವು ಸಂಘಟನೆಗಳ ಚಿತಾವಣೆಗೆ ಬಲಿಯಾಗಬೇಡಿ’ ಎಂದರು.