ಬೆಂಗಳೂರು: ಶಾಲೆಗಳಲ್ಲಿ ಆಡೋಡಿ, ನಲಿದು ಬೆಳೆಯುವ ವಯಸ್ಸಿನಲ್ಲಿ ಪರಸ್ಪರರ ಮಧ್ಯೆ ನಂಬಿಕೆ, ಸಾಮರಸ್ಯ, ಸಹಬಾಳ್ವೆಯ ವಿಶಾಲ ಮನೋಭಾವ ಇರುವ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅಂತಹ ಕೇಂದ್ರಗಳಲ್ಲಿ ಅಸಹನೆ, ಅಪನಂಬಿಕೆಯನ್ನು ಹುಟ್ಟುಹಾಕುವ ಕೆಲಸವನ್ನು ಯಾರೊಬ್ಬರೂ ಮಾಡುವುದು ಸರಿಯಲ್ಲ ಎಂಬ ನಿರ್ಣಯವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಸಾಧ್ಯತೆ ಇದೆ.