ರೈತ, ಕೃಷಿ ಕಾರ್ಮಿಕ ಸಂಘಟನೆಯ ಸಮಾವೇಶದಲ್ಲಿ ಗುರುವಾರ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಒಕ್ಕೂಟ ರಾಷ್ಟ್ರದಲ್ಲಿ ಆಯಾ ಪ್ರದೇಶದ ರಾಜ್ಯ ಭಾಷೆ ಹಾಗೂ ಮಾತೃಭಾಷೆಗಳಿಗೆ ಮಹತ್ವ ಸಿಗಬೇಕು. ಸರ್ವಭಾಷಾ ಸಮಾನತೆಯೇ ಒಕ್ಕೂಟ ಸರ್ಕಾರದ ನೀತಿಯಾಗಬೇಕು. ಯಾವುದೇ ಭಾಷೆ ಅವರ ಇಚ್ಛೆಯಂತೆ ಕಲಿಸಲು ಪ್ರೋತ್ಸಾಹಿಸಲಿ. ಆದರೆ ಅದನ್ನೇ ರಾಷ್ಟ್ರಭಾಷೆ ಎಂದು ಕಲಿಸುವುದು ಖಂಡಿತಾ ತಪ್ಪು. ಅದಕ್ಕೆ ನಮ್ಮ ವಿರೋಧವಿದೆ’ ಎಂದರು.