ಕರ್ನಾಟಕದ ಸೌಹಾರ್ದ ಕೇಂದ್ರಗಳಲ್ಲಿ ಒಂದಾದ ಬಾಬಾಬುಡನ್ಗಿರಿಯಲ್ಲಿ ವೈದಿಕ ಪರಂಪರೆ ಪ್ರಕಾರ ಪೂಜೆ–ಧಾರ್ಮಿಕ ವಿಧಿಗಳು ನಡೆಯಬೇಕು ಎಂದು ಬಿಜೆಪಿ 1998ರಿಂದ ಹೋರಾಟ ಆರಂಭಿಸಿದೆ. ಈ ಬೇಡಿಕೆ ಈಡೇರಿಕೆಗಾಗಿ ಪ್ರತಿವರ್ಷ ದತ್ತ ಮಾಲೆ ಅಭಿಯಾನ, ದತ್ತಜಯಂತಿ ಆಚರಣೆಯನ್ನೂ ನಡೆಸುತ್ತಿದೆ. ಇದಕ್ಕೂ ಪೂರ್ವದಲ್ಲಿ ಶಾಖಾದ್ರಿ ಅವರು ಬಾಬಾಬುಡನ್ಗಿರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈಗಲೂ ಅವರೇ ವಿಧಿವಿಧಾನ ನೆರವೇರಿಸುತ್ತಿದ್ದಾರೆ. ವೈದಿಕ ಆಚರಣೆಗೂ ಅವಕಾಶ ಕೊಡಬೇಕೆಂಬ ಬಿಜೆಪಿ ಬೇಡಿಕೆ ಪ್ರಶ್ನಿಸಿ ಅವರು ಕೋರ್ಟ್ಗೆ ಹೋಗಿದ್ದರು.