‘ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ದೇವಲೋಕವನ್ನು ಧರೆಗೆ ಇಳಿಸಲಿಲ್ಲ. ಸಾಲ ಮಾಡುವುದು ಮತ್ತು ಮರುಪಾವತಿಸುವುದು ಸರ್ಕಾರದ ಕಾರ್ಯವೈಖರಿ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಅಭಿವೃದ್ಧಿಗೆ ಸಾಲ ಮಾಡಿದರೆ ಹೊರತು ಮನೆಗೆ ಕೊಂಡೊಯ್ಯಲಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ರಾಜ್ಯ ಸರ್ಕಾರ ಸಾಲ ಮಾಡಲಿಲ್ಲವೇ’ ಎಂದು ಪ್ರಶ್ನಿಸಿದರು.