ಮುಖ್ಯಮಂತ್ರಿ ತಲೆದಂಡ ಆಗುತ್ತದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಏನು ಬೇಕಾದರೂ ಹೇಳುತ್ತಾರೆ. ಪ್ರಿಯಾಂಕ್ ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ನೀವು ಐಟಿ ಬಿಟಿ ಸಚಿವರಿದ್ದಾಗ ಯಾಕೆ ಹಿಡಿಯಲಿಲ್ಲ. ಅವನು ಹ್ಯಾಕರ್ ಅಂತಾ ನಿಮಗೆ ಗೊತ್ತಾಗಲಿಲ್ಲವಾ? ಕಾಂಗ್ರೆಸ್ ಸರ್ಕಾರದಲ್ಲಿ ಸಿ.ಎಂ, ಗೃಹ ಸಚಿವರು, ಐಟಿ, ಬಿಟಿ ಸಚಿವರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಯಾಕೆ ಹಿಡಿಯಲಿಲ್ಲ ಎಂದು ಪ್ರಶ್ನಿಸಿದರು.