ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿಯಿಂದ ಬರುವ ಅಗತ್ಯವಾದರೂ ಏನು? ಅವರು ಪ್ರಚಾರಕ್ಕಂತೂ ಬಂದಿಲ್ಲ. ಏನು ಹಂಚಿಕೆ ಮಾಡಲಿದ್ದಾರೆ ಎಂಬುದು ನಿಗೂಢವಾಗಿದೆ. ಆದ್ದರಿಂದ ಈ ಬಗ್ಗೆ ಚುನಾವಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಲಿದ್ದೇವೆ’ ಎಂದರು. ‘ವೈಯಕ್ತಿಕವಾಗಿ ಬಿ.ಜಿ. ಪಾಟೀಲ ಅವರ ಬಗ್ಗೆ ಗೌರವವಿದೆ. ಆದರೆ, ಅವರು ತಮ್ಮ ಅವಧಿಯಲ್ಲಿ ಪಂಚಾಯಿತಿ ಸದಸ್ಯರ ಪರವಾಗಿ ಏನು ಕೆಲಸ ಮಾಡಿದ್ದಾರೆ’ ಎಂದೂ ಪ್ರಶ್ನಿಸಿದರು.