ಇಂಡಿ ತಾಲ್ಲೂಕಿನ ಲಾಳಸಂಗಿ ಗ್ರಾಮದ ಬಾಳಂತಿ ಸಾವಿತ್ರಿ ಬಡಿಗೇರ ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಬಂದಿದ್ದರು. ಆದರೆ, ಮುಷ್ಕರದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಮರಳಲು ಬಸ್ ಇಲ್ಲದೇ ಪರದಾಡುತ್ತಿರುವುದನ್ನು ತಿಳಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ತಮ್ಮ ಸರ್ಕಾರಿ ಇನೊವಾ ಕಾರಿನಲ್ಲಿ ಬಾಣಂತಿ, ಮಗುವನ್ನು ಕೂರಿಸಿಕೊಂಡು ಹೋಗಿ ಮನೆಗೆ ಸುರಕ್ಷಿತವಾಗಿ ಬಿಟ್ಟು ಬಂದರು.